Posts

Showing posts from August, 2020

ನಗುವರಿಯದ ಮುಖ..

ಹೊಸ ಜಗತ್ತಿನಲ್ಲಿ ನವನವೀನ ಶೋಕಿಗಳು ಹೆಚ್ಚಾಗುತ್ತಿವೆಯೇ ವಿನಃ ಧರ್ಮ ಹಾಗೂ ಸಂಸ್ಕೃತಿಯ ಬಗೆಗಿನ ನಿಷ್ಠೆಯಲ್ಲ. ಗಿಡ ಬೆಳೆಸಬೇಕಾಗಿದ ಕೈಗಳು ನೀರುಣಿಸಿ ಪೋಷಿಸುವುದನ್ನು ಮರೆತಿವೆಯೋ ಅಥವಾ ಎಲ್ಲವೂ ಅತಿಯಾಗಿ ಗಿಡಕ್ಕೆ ಕೊಳೆ ಬರುತ್ತಿದೆಯೋ ಎಂದು ತಿಳಿಯದು. ನದಿಯಾಗಬೇಕಾದ ನೀರಿನ ಚಿಲುಮೆಯನ್ನು ತಡೆಯಲೆತ್ನಿಸುವುದು ಮತ್ತು ಕಲುಷಿತಗೊಳಿಸುವುದು ಸುತ್ತಲಿನ ಎಲ್ಲರಿಗೂ ಅಪಾಯ ತರುವಂತದ್ದು. ಹಾಗೆಯೇ ಮನಸ್ಸು ಕೂಡ ಹುಟ್ಟಿನಲ್ಲಿ ಶುದ್ಧವಾಗಿದ್ದು ಪ್ರಪಂಚದ ಸಂಪರ್ಕಕ್ಕೆ ಬಂದು ಬಾಲ್ಯದಿಂದ ಸಂಸ್ಕಾರ ಮರೆತು ಅಥವಾ ಸಿಗದೇ ಕೊಚ್ಚೆಗೆ ಸಮವಾಗಿ ಬೇಡ ಬೇಕುಗಳ ಮಿಶ್ರಣವಾಗಿ ನಾರುತ್ತಾ ದುಷ್ಪರಿಣಾಮವನ್ನೇ ಉಂಟುಮಾಡುತ್ತದೆ. ಜಗತ್ತಿನ ಭವಿಷ್ಯವಿರುವುದು ಇಂದು ಬೆಳೆಯುತ್ತಿರುವ ಹಾಗೂ ಅವರನ್ನು ಬೆಳೆಸುತ್ತಿರುವ ಮನಸ್ಸುಗಳ ಅಡಿಪಾಯದ ಮೇಲೆ. ತಿದ್ದುವವರು ತಪ್ಪನ್ನು ತಿದ್ದಿದರೆ ತಾನೇ ತಪ್ಪಾದದ್ದು ಸರಿಯಾಗುವುದು? ಬೇಕೆಂದೇ ಸರಿಯನ್ನು ತಪ್ಪೆಂದು ತಿದ್ದುವ ಮನಸ್ಸುಗಳು ಇರಬಾರದಷ್ಟೇ.... ಶಿಲ್ಪಿಯು ಜಾಗರೂಕತೆ ವಹಿಸಿದಷ್ಟು ಮತ್ತು ನಿಪುಣನಾದಷ್ಟು ಶಿಲ್ಪವು ಸುಂದರಗೊಳ್ಳುವುದು; ಶಿಲ್ಪದ ಸೌಂದರ್ಯ ಕೆಡುವುದು ಅಜಾಗರೂಕತೆಯಿಂದಾಗಿರುತ್ತದೆ. ಪ್ರತಿದಿನದ ನಾಳೆಯ ಸಂತೋಷದ ಬಗ್ಗೆ ಚಿಂತಿಸುವ ನಾವು ದೊರೆತ ಹಾಗೂ ಪಡೆದುಕೊಳ್ಳಬೇಕಾದ ಸಂಸ್ಕಾರಗಳ  ಮತ್ತು ಸಾಗಬೇಕಾದ ಧರ್ಮದ ಮಾರ್ಗಗಳ ಬಗ್ಗೆ ಚಿಂತಿಸಲಾರೆವು. ನಗುವರಿಯದ ಮುಖಕ್ಕೆ ಕಾರಣವಾಗಿರುವಂತದ್ದು ಧರ್ಮ ಮತ್ತು

ಸಮಯ ಸಮಸ್ಯೆ?

ಸಮಸ್ಯೆಗಳಿಲ್ಲದ ಬದುಕ ಬದುಕುವುದು ಯೋಗ್ಯವೆನಿಸಲ್ಲ. ಬದುಕ ಬಾಳಲಿಕ್ಕಾಗುವುದು ಸಮಸ್ಯೆಗಳಿಲ್ಲವೆಂದರೆ ಮಾತ್ರವಲ್ಲ. ಮನುಷ್ಯ ಜೀವನದ ಮುಂದಿನ ದಾರಿ ಕಾಣುವುದು ಸಮಸ್ಯೆಗಳ ಬೆಳಕಿನಲ್ಲಿ. ಜೀವನ ಪ್ರಯಾಣ ಸುಖವಾಗುವುದು ಸಮಸ್ಯೆಗಳ ಸೂರಿನಡಿಯಲ್ಲಿ. ಒಮ್ಮೆ ನಗು ಮರೆತ ಮಾತ್ರಕ್ಕೆ ಅಳುವೆ ಜೀವನವೆಂದು ಯೋಚಿಸುವುದಲ್ಲ.  ಕಷ್ಟಗಳಿಗೆ ಸಮಯವನ್ನು ಹಳಿಯಲಾಗದು ಯಾಕೆಂದರೆ ಸಮಯವು ಕಷ್ಟಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ ಸಮಯವು ಕಷ್ಟಗಳಿಗೆ ಕಾರಣವೂ ಅಲ್ಲ,ಕಾರಣವಾಗಿಯೂ ಇರಲಾರದು. ಉದ್ಭವಿಸುವ ಸಂದರ್ಭಗಳು ಯೋಚನೆಯನ್ನು ಬದಲಾಯಿಸಿ ಸಮಯವನ್ನು ಕಷ್ಟ ವೆನ್ನುವ ಮೂರ್ಖನನ್ನಾಗಿಸುತ್ತವೆ. ಮೂರ್ಖರಾದವರು ಜೀವನದ ಸಮಯವನ್ನೆಲ್ಲ ವ್ಯಯಿಸುತ್ತಾರೆ ಕಷ್ಟವೆಂದು ತಿಳಿದು;ಯಾಕೆಂದರೆ ಅವರಿಗೆ ತಿಳಿಯದು ಬದಲಾಗಿರುವುದು ಉದ್ಭವಿಸಿದ ಸಂದರ್ಭಗಳಿಂದ ಬದಲಾದ ಯೋಚನೆಗಳಾಗಿವೆಯೇ ಹೊರತು ಸಮಯವಲ್ಲವೆಂದು.. ಖುಷಿಯಾಗಿರುವವನು ಆತನೊಬ್ಬನೇ ಆಗಿರುವನು ಅವನು ಜ್ಞಾನಿ. ಸಮಯ ಕಷ್ಟವಾಗದೇ ಇರುವುದು, ಕಷ್ಟದ ಸಮಯಗಳು ಬರದೇ ಇರುವುದು ಆತನೊಬ್ಬನಿಗೇ.. ಮನಸ್ಸು ಸ್ಥಿರವಾಗಿರುವಾಗ ಆತನ ಯೋಚನೆಗಳು ಬದಲಾಗಲಾರವು. ಬದಲಾಗದ ಯೋಚನೆಗಳು ಕಷ್ಟಗಳ ಮತ್ತು ಚಿಂತೆಗಳ ಬಗ್ಗೆ ಚಿಂತಿಸಲಾರವು. ಅವು ನಿತ್ಯವಾಗಿರುವ,ಸಾವಿಲ್ಲದ, ಹುಟ್ಟಿರದ ಆನಂದವನ್ನು ಪಡೆಯುವ ಸಾಧನೆಯಲ್ಲಿ ದೊರಕುವವು.