ಸಮಯ ಸಮಸ್ಯೆ?

ಸಮಸ್ಯೆಗಳಿಲ್ಲದ ಬದುಕ ಬದುಕುವುದು ಯೋಗ್ಯವೆನಿಸಲ್ಲ. ಬದುಕ ಬಾಳಲಿಕ್ಕಾಗುವುದು ಸಮಸ್ಯೆಗಳಿಲ್ಲವೆಂದರೆ ಮಾತ್ರವಲ್ಲ. ಮನುಷ್ಯ ಜೀವನದ ಮುಂದಿನ ದಾರಿ ಕಾಣುವುದು ಸಮಸ್ಯೆಗಳ ಬೆಳಕಿನಲ್ಲಿ. ಜೀವನ ಪ್ರಯಾಣ ಸುಖವಾಗುವುದು ಸಮಸ್ಯೆಗಳ ಸೂರಿನಡಿಯಲ್ಲಿ. ಒಮ್ಮೆ ನಗು ಮರೆತ ಮಾತ್ರಕ್ಕೆ ಅಳುವೆ ಜೀವನವೆಂದು ಯೋಚಿಸುವುದಲ್ಲ. 

ಕಷ್ಟಗಳಿಗೆ ಸಮಯವನ್ನು ಹಳಿಯಲಾಗದು ಯಾಕೆಂದರೆ ಸಮಯವು ಕಷ್ಟಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ ಸಮಯವು ಕಷ್ಟಗಳಿಗೆ ಕಾರಣವೂ ಅಲ್ಲ,ಕಾರಣವಾಗಿಯೂ ಇರಲಾರದು. ಉದ್ಭವಿಸುವ ಸಂದರ್ಭಗಳು ಯೋಚನೆಯನ್ನು ಬದಲಾಯಿಸಿ ಸಮಯವನ್ನು ಕಷ್ಟ ವೆನ್ನುವ ಮೂರ್ಖನನ್ನಾಗಿಸುತ್ತವೆ. ಮೂರ್ಖರಾದವರು ಜೀವನದ ಸಮಯವನ್ನೆಲ್ಲ ವ್ಯಯಿಸುತ್ತಾರೆ ಕಷ್ಟವೆಂದು ತಿಳಿದು;ಯಾಕೆಂದರೆ ಅವರಿಗೆ ತಿಳಿಯದು ಬದಲಾಗಿರುವುದು ಉದ್ಭವಿಸಿದ ಸಂದರ್ಭಗಳಿಂದ ಬದಲಾದ ಯೋಚನೆಗಳಾಗಿವೆಯೇ ಹೊರತು ಸಮಯವಲ್ಲವೆಂದು..

ಖುಷಿಯಾಗಿರುವವನು ಆತನೊಬ್ಬನೇ ಆಗಿರುವನು ಅವನು ಜ್ಞಾನಿ. ಸಮಯ ಕಷ್ಟವಾಗದೇ ಇರುವುದು, ಕಷ್ಟದ ಸಮಯಗಳು ಬರದೇ ಇರುವುದು ಆತನೊಬ್ಬನಿಗೇ.. ಮನಸ್ಸು ಸ್ಥಿರವಾಗಿರುವಾಗ ಆತನ ಯೋಚನೆಗಳು ಬದಲಾಗಲಾರವು. ಬದಲಾಗದ ಯೋಚನೆಗಳು ಕಷ್ಟಗಳ ಮತ್ತು ಚಿಂತೆಗಳ ಬಗ್ಗೆ ಚಿಂತಿಸಲಾರವು. ಅವು ನಿತ್ಯವಾಗಿರುವ,ಸಾವಿಲ್ಲದ, ಹುಟ್ಟಿರದ ಆನಂದವನ್ನು ಪಡೆಯುವ ಸಾಧನೆಯಲ್ಲಿ ದೊರಕುವವು.

Comments

Popular posts from this blog

ಅನಿಶ್ಚಿತ

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ