Posts

Showing posts from February, 2021

ಆತ್ಮತತ್ವ

Selfishness is far better than self lessness... ಕೆಲವೊಮ್ಮೆ ಜೀವನ ಬೇಸರವಾಗಿಬಿಡುತ್ತದೆ.. ಜೀವ ಚೈತನ್ಯ ಕಳೆದುಕೊಂಡು ಕಂಗೆಟ್ಟಾಗ ಅದನ್ನು ಮರಳಿಸಲು ಸಾಧ್ಯವಿರುವುದು ನಾವು ಕಂಡ ಆಶಾದಾಯಕ ಕನಸುಗಳಿಗೆ ಮಾತ್ರ... ವ್ಯರ್ಥವಾಗಿ ನಿಮ್ಮ ಸ್ವಂತ ಸಮಯವನ್ನು ಬೇರೆಯವರಿಗಾಗಿ ವ್ಯಯಿಸುವುದನ್ನು  ಬಿಟ್ಟುಬಿಡಿ... ಸಂಬಂಧಿಗಳಾದರೂ ಸರಿ, ಸ್ನೇಹಿತರಾದರೂ ಸರಿ ಯಾರು ನಮ್ಮ ಖುಷಿಗೆ ಅಡ್ಡವಾಗಿರುತ್ತಾರೋ ಅವರನ್ನು ದಾಟಿ ಮುಂದೆ ಹೋಗುವುದೇ ಸರಿಯಾಗಿರುತ್ತದೆ... ಆದಕಾರಣ ಸಮಯವನ್ನು ನಿಮ್ಮ ಜೀವನದ ಮೇಲೆಯೇ ಖರ್ಚು ಮಾಡಿ..ಅದು ಅಮೂರ್ತ ಅನುಭವಗಳನ್ನು ಒದಗಿಸುವಲ್ಲಿ ವರ್ತಮಾನದಲ್ಲಿ ಉಪಯೋಗವಾಗದಿದ್ದರೂ ವಿಫಲವಂತೂ ಆಗಲಾರದು..  ಕನಸುಗಳು ಚೈತನ್ಯವನ್ನು ಮರಳಿಸುತ್ತದೆ ಎಂಬುದಕ್ಕೆ ಕಾರಣಗಳು ಹೀಗಿವೆ.. ~• ನಿಮ್ಮ ಪ್ರಯತ್ನವೊಂದಿದ್ದರೆ ಅದು ಎಂದಿಗೂ ನಿಮ್ಮನ್ನು ನಿರಾಸೆ ಗೊಳಿಸಲಾರದು. ~• ಪ್ರತಿದಿನದ ಮುಂಜಾನೆಯಲ್ಲಿ ನವನವೀನ ಕಲ್ಪನೆಗಳು ನಮ್ಮ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತದೆ. ~• ಸಾಗಿಬಂದ ತಪ್ಪಾದ ದಾರಿಯನ್ನೋ ಅಥವಾ ಮೂರ್ಖರಾಗಿ ಆರಿಸಿ ಕೊಂಡದ್ದನ್ನೋ ಮರೆಸಿ ಹೊಸದಾದ ಸಂತಸ ನೀಡುವ ನಿಖರ ಗುರಿಯೆಡೆಗೆ ನಮ್ಮನ್ನು ಎಳೆಯುತ್ತದೆ‌.. ~• ಜೀವನದಲ್ಲಿ ಕಳೆದುಕೊಂಡ ವಿಶ್ವಾಸ ಹಾಗು ನಂಬಿಕೆಗಳು ಪುನಃ ಚಿಗುರಲು ನೀರುಣಿಸುತ್ತದೆ. ನಮ್ಮನ್ನು ನಾವು ಅರ್ಥೈಸಿಕೊಂಡಾದಮೇಲೆ ಇತರರನ್ನು ಅರ್ಥೈಸಿಕೊಳ್ಳಲು ಹೊರಟರೆ ಉತ್ತಮ. ಏಕೆಂದರೆ ಖಾಲಿ ಇರುವ ಪಾತ್ರೆಯ

ಕುರುಡು ಮನ

ಅಳಬೇಕೋ, ನಗಬೇಕೋ, ಕ್ರೋಧಗೊಳ್ಳಬೇಕೋ, ವಿಷಾದದಿಂದ ಪರಿಸ್ಥಿತಿಯನ್ನು ಹಳಿಯಬೇಕೋ ಏನೂ ತಿಳಿಯುತ್ತಿಲ್ಲ.. ಎಷ್ಟು ನಿಸ್ಸಹಾಯಕ ಪರಿಸ್ಥಿತಿ.. ಈ ಅಸಹಾಯಕತೆಯ ದುಃಖವು ಮನಸ್ಸಿನ ನೋವಾಗಿ ಕಣ್ಣಹನಿ ರೂಪವನ್ನು ಪಡೆಯುತ್ತಿದೆ ಎನಿಸುತ್ತಿದೆ..     ನಾನು ನನ್ನನ್ನು ಪ್ರಶ್ನಿಸಿಕೊಳ್ಳಬೇಕೋ, ಅಥವಾ ಸರಿ ಯಾವುದೆಂದು ಇತರರನ್ನು ಒಟ್ಟುಗೂಡಿಸಿ ವಾದ ಮಾಡಬೇಕೋ...  ಹೀನಾಯ ಪರಿಸ್ಥಿತಿಯು ಕಣ್ಣಮುಂದೆಯೇ ನಡೆಯುತ್ತಿರುವುದನ್ನು ನೋಡುತ್ತಿದ್ದರು ಸುಮ್ಮನಾಗಿರುವಂತಾಗಿದೆಯಲ್ಲಾ... ಎಂತಹ ಪಾಪದ ಜನ್ಮವಿದು...      ಒಬ್ಬರಿಗೊಬ್ಬರು ಮಿಡಿಯುವಂತಹ ಸ್ನೇಹವಿಲ್ಲ.. ಇಬ್ಬರು ಒಂದಾಗುವಂತಹ ಪ್ರೀತಿಯಂತೂ ಇಲ್ಲವೇ ಇಲ್ಲ.. ಶುದ್ಧವಾದ ಸಹಜ ಗೆಳೆತನ ವಷ್ಟೇ... ಆದರೆ ಗೆಳತಿಯ ಬಗೆಗಿನ ಅಸಹ್ಯವಾದ ಮಾತುಗಳಿಗಾಗಿ ಮನವು ಇಂದೇಕೋ ವಿಚಲಿತಗೊಂಡು ನಿಂತಿದೆ..    ಗಂಡು ಜನ್ಮ ಪಡೆದು ಯುವಕನಾದ ಮಾತ್ರಕ್ಕೆ ಅನ್ಯ ಸ್ತ್ರೀಯ ಬಗೆಗಿನ ನಮ್ಮ ದೃಷ್ಟಿ ಏಕೆ ನಮ್ಮ ಆಪ್ತರ ಮೇಲಿನ ದೃಷ್ಟಿಗಿಂತ ಭಿನ್ನವಾಗಿ ಬಿಡುವುದು?? ಅವರೇನು ತಪ್ಪೆಸಗಿದರು? ಯಾರೊಬ್ಬರೂ ತಮ್ಮ ದೇಹದ ಸ್ವಯಂ ನಿರ್ಮಾತೃ ಗಳೇನಲ್ಲ. ಪ್ರತಿಯೊಬ್ಬರ ಶರೀರವು ಭಿನ್ನವಾಗಿ ದೇವರಿಂದ ಕೊಡಲ್ಪಟ್ಟಿದ್ದೇ ಆಗಿರುತ್ತದೆ. ಇವುಗಳ ಅರಿವಿದ್ದರೂ ಅಸಹ್ಯವಾಗಿ ,ಅಸಭ್ಯವಾಗಿ ಅವಳ ದೇಹದ ಅಂಗಾಂಗಗಳ ವಿವರಣೆಯ ಅಗತ್ಯವೇನು? ಅವಳು ಇರುವಲ್ಲಿ ನಿಮ್ಮ ಅಮ್ಮನೋ ಸಹೋದರಿಯನ್ನೋ ಅಥವಾ ನಿಮ್ಮನ್ನೋ ಕಲ್ಪಿಸಿಕೊಂಡು ನಿರ್ಮಲ ಮನಸ್ಸಿನಿಂದ ಒಮ್