ಆತ್ಮತತ್ವ

Selfishness is far better than self lessness...


ಕೆಲವೊಮ್ಮೆ ಜೀವನ ಬೇಸರವಾಗಿಬಿಡುತ್ತದೆ.. ಜೀವ ಚೈತನ್ಯ ಕಳೆದುಕೊಂಡು ಕಂಗೆಟ್ಟಾಗ ಅದನ್ನು ಮರಳಿಸಲು ಸಾಧ್ಯವಿರುವುದು ನಾವು ಕಂಡ ಆಶಾದಾಯಕ ಕನಸುಗಳಿಗೆ ಮಾತ್ರ...

ವ್ಯರ್ಥವಾಗಿ ನಿಮ್ಮ ಸ್ವಂತ ಸಮಯವನ್ನು ಬೇರೆಯವರಿಗಾಗಿ ವ್ಯಯಿಸುವುದನ್ನು  ಬಿಟ್ಟುಬಿಡಿ... ಸಂಬಂಧಿಗಳಾದರೂ ಸರಿ, ಸ್ನೇಹಿತರಾದರೂ ಸರಿ ಯಾರು ನಮ್ಮ ಖುಷಿಗೆ ಅಡ್ಡವಾಗಿರುತ್ತಾರೋ ಅವರನ್ನು ದಾಟಿ ಮುಂದೆ ಹೋಗುವುದೇ ಸರಿಯಾಗಿರುತ್ತದೆ... ಆದಕಾರಣ ಸಮಯವನ್ನು ನಿಮ್ಮ ಜೀವನದ ಮೇಲೆಯೇ ಖರ್ಚು ಮಾಡಿ..ಅದು ಅಮೂರ್ತ ಅನುಭವಗಳನ್ನು ಒದಗಿಸುವಲ್ಲಿ ವರ್ತಮಾನದಲ್ಲಿ ಉಪಯೋಗವಾಗದಿದ್ದರೂ ವಿಫಲವಂತೂ ಆಗಲಾರದು.. 

ಕನಸುಗಳು ಚೈತನ್ಯವನ್ನು ಮರಳಿಸುತ್ತದೆ ಎಂಬುದಕ್ಕೆ ಕಾರಣಗಳು ಹೀಗಿವೆ..

~• ನಿಮ್ಮ ಪ್ರಯತ್ನವೊಂದಿದ್ದರೆ ಅದು ಎಂದಿಗೂ ನಿಮ್ಮನ್ನು ನಿರಾಸೆ ಗೊಳಿಸಲಾರದು.

~• ಪ್ರತಿದಿನದ ಮುಂಜಾನೆಯಲ್ಲಿ ನವನವೀನ ಕಲ್ಪನೆಗಳು ನಮ್ಮ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತದೆ.

~• ಸಾಗಿಬಂದ ತಪ್ಪಾದ ದಾರಿಯನ್ನೋ ಅಥವಾ ಮೂರ್ಖರಾಗಿ ಆರಿಸಿ ಕೊಂಡದ್ದನ್ನೋ ಮರೆಸಿ ಹೊಸದಾದ ಸಂತಸ ನೀಡುವ ನಿಖರ ಗುರಿಯೆಡೆಗೆ ನಮ್ಮನ್ನು ಎಳೆಯುತ್ತದೆ‌..

~• ಜೀವನದಲ್ಲಿ ಕಳೆದುಕೊಂಡ ವಿಶ್ವಾಸ ಹಾಗು ನಂಬಿಕೆಗಳು ಪುನಃ ಚಿಗುರಲು ನೀರುಣಿಸುತ್ತದೆ.


ನಮ್ಮನ್ನು ನಾವು ಅರ್ಥೈಸಿಕೊಂಡಾದಮೇಲೆ ಇತರರನ್ನು ಅರ್ಥೈಸಿಕೊಳ್ಳಲು ಹೊರಟರೆ ಉತ್ತಮ. ಏಕೆಂದರೆ ಖಾಲಿ ಇರುವ ಪಾತ್ರೆಯಿಂದ ಮತ್ತೊಂದು ಪಾತ್ರೆಯನ್ನು ತುಂಬಲು ಅಸಾಧ್ಯ..

ಆದ್ದರಿಂದ ದಿನದ ಬಹು ಸಮಯವನ್ನು ನಿಮ್ಮೊಟ್ಟಿಗೆ, ನೀವು ನಿಮಗಾಗಿ ಕಳೆಯಿರಿ. ನಿಮ್ಮನ್ನು ನೀವು ಪೂರ್ಣ ಮಾಡಿಕೊಳ್ಳಿ. ಇತರರಿಗಾಗಿ ಬದುಕುವುದು ಅಥವಾ ಸಮಯ ವ್ಯಯಿಸುವುದು ಇದ್ದೇ ಇರುತ್ತದೆ. ಫಲ ಬಿಟ್ಟು ದೃಢವಾಗಿ ಬೇರೂರಿದ ದಷ್ಟ-ಪುಷ್ಟ ಮರವನ್ನೇ ಪಕ್ಷಿಗಳು ಗೂಡುಕಟ್ಟಲು ಆರಿಸಿಕೊಳ್ಳುವುದು ಹಾಗೂ ಆಕರ್ಷಣೆಗೊಂಡು ಪ್ರಾಣಿಗಳು ಮತ್ತು ಮನುಷ್ಯರು ಹತ್ತಿರ ಬರುವುದು..

ಸೂಕ್ಷ್ಮವಾಗಿ  ಆಲೋಚಿಸಿ ನಿರ್ಧರಿಸಿ. ಮಂಜಿನಂತೆ ಕರಗಿ ಹೋಗುವ ಆಯ್ಕೆ ನಿಮ್ಮ ಕಣ್ಣಮುಂದಿದೆ. ಆಸೆ ಇದ್ದರೆ ಈ ಕ್ಷಣವೇ ಬದಲಾಗಿ ಬಿಡಿ. ನಿಧಾನಿಸತೊಡಗಿದರೆ ಮಂಜು ಮಾಯವಾಗಿಬಿಟ್ಟೀತು!!



Comments

  1. ಈತರದ ನವೀನ ಯೋಚನೆಗಳು ಹೊಸಜೀವನಕ್ಕೆ ನಾಂದಿ.

    ReplyDelete

Post a Comment

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ